Please enable javascript.ದಿನಭವಿಷ್ಯ: 20 ಫೆಬ್ರವರಿ 2017 - fortune - Vijay Karnataka

ದಿನಭವಿಷ್ಯ: 20 ಫೆಬ್ರವರಿ 2017

Vijaya Karnataka Web | 20 Feb 2017, 4:00 am
Subscribe

ಬಾಯಿ ತಪ್ಪಿ ಆಡಿದ ಮಾತಿಗೆ ಕ್ಷ ಮೆ ಯಾಚಿಸಬೇಕಾಗುವುದು. ಆಂಜನೇಯ ಸ್ತೋತ್ರ ಪಠಿಸಿರಿ.

astrology/daily/fortune
ದಿನಭವಿಷ್ಯ: 20 ಫೆಬ್ರವರಿ 2017
ಮೇಷರಾಶಿ:- ಈದಿನ ಕೆಲ ಗ್ರಹಗಳ ಸಂಚಾರದಿಂದ ಏನೋ ಮಾಡಲು ಹೋಗಿ ಇನ್ನೇನೋ ಆದೀತು. ಎಚ್ಚರವಿರಲಿ. ಬಾಯಿ ತಪ್ಪಿ ಆಡಿದ ಮಾತಿಗೆ ಕ್ಷ ಮೆ ಯಾಚಿಸಬೇಕಾಗುವುದು. ಆಂಜನೇಯ ಸ್ತೋತ್ರ ಪಠಿಸಿರಿ.

ವೃಷಭ:- ನಿಮ್ಮ ಮನಸ್ಸಿನ ಕಾರ್ಯ ಯೋಜನೆಗಳು ಸಿದ್ಧಿಸುವುದು. ಈದಿನ ನಿಮ್ಮ ಅನಿಸಿಕೆಯಂತೆ ಕೆಲಸ ಕಾರ್ಯಗಳು ನಡೆಯುವುದು. ಮಕ್ಕಳಿಂದ ಬರುವ ವಾರ್ತೆಯು ಇಡೀ ದಿನ ಉಲ್ಲಾಸಿತವನ್ನುಂಟು ಮಾಡುವುದು. ಆರ್ಥಿಕ ಸಮಸ್ಯೆ ಇರುವುದಿಲ್ಲ.

ಮಿಥುನ:- ನಿಮ್ಮ ನಿರೀಕ್ಷೆ ಬೆಟ್ಟದಷ್ಟು ಇದೆ. ಆದರೆ ಗ್ರಹಗಳ ಸಂಚಾರವು ಅದಕ್ಕೆ ಪೂರಕವಾಗಿರುವುದಿಲ್ಲ. ಕೂತು ಮಲಗು ಎಂಬುದು ಹಿರಿಯರ ಅನುಭವದ ನುಡಿ. ಹಾಗಾಗಿ ಈದಿನ ಅವಸರದಿಂದ ಉತ್ತಮ ಅವಕಾಶವನ್ನು ಕಳೆದುಕೊಳ್ಳದಿರಿ.

ಕಟಕ:- ಮನಸ್ಸಿನ ಗೋಜಲುಗಳನ್ನು ಕೊಡವಿಕೊಳ್ಳಲು ಗೆಳೆಯರ ಜೊತೆ ಒಗ್ಗೂಡಿ ಮಾತನಾಡಿರಿ. ಗುರು ಹಿರಿಯರ ಆಶೀರ್ವಾದದಿಂದ ಈದಿನದ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು. ಆರ್ಥಿಕ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ.

ಸಿಂಹ:- ನಿಮ್ಮದು ಅಪರೂಪದ ಕ್ರಿಯಾಶೀಲತೆ. ಮೇಲ್ನೋಟಕ್ಕೆ ಒರಟು ಸ್ವಭಾವದಂತೆ ಕಂಡರೂ ನಿಮ್ಮದು ಮಗುವಿನಂತಹ ಹೃದಯ. ಅದರಲ್ಲಿ ಕಪಟವಿರುವುದಿಲ್ಲ. ಈದಿನ ನಿಮ್ಮ ಮಾತಿಗೆ ಎಲ್ಲೆಡೆ ಗೌರವ ಬರುವುದು.

ಕನ್ಯಾ:- ಬಾಳಸಂಗಾತಿಯ ಕಾರಣದಿಂದ ನಿಮ್ಮ ಘನತೆಗೆ ಹೆಚ್ಚಿನ ತೂಕ ಬರಲಿದೆ. ಎಲ್ಲರೂ ನಿಮ್ಮ ಬುದ್ಧಿಮಟ್ಟವನ್ನು ಕೊಂಡಾಡುವರು. ಅನ್ಯರಿಂದ ಕೈಗಡ ಪಡೆದದ್ದನ್ನು ವಾಪಸ್ಸು ಮಾಡಲು ಚಿಂತಿಸುವಿರಿ. ವಿವಿಧ ಮೂಲಗಳಿಂದ ಹಣ ಬರುವುದು.

ತುಲಾ:- ನಿಮ್ಮ ಅದ್ವಿತೀಯ ಮಾತಿನ ಶಕ್ತಿಗೆ ಜನರನ್ನು ಸೆಳೆಯುವ ಶಕ್ತಿ ಇರುತ್ತದೆ. ಅಂತೆಯೇ ನೀವಾಡುವ ಮಾತು ಈದಿನ ನೂತನ ಕಾರ್ಯಭಾರವನ್ನು ಒಪ್ಪಿಕೊಳ್ಳುವಂತೆ ಪ್ರೇರೇಪಿಸುವುದು. ನಿಮ್ಮ ಕರ್ತೃತ್ವ ಶಕ್ತಿಯನ್ನು ವಿರೋಧಿಗಳು ಕೊಂಡಾಡುವರು.

ವೃಶ್ಚಿಕ:- ರಾಜಕಾರಣಿಗಳಿಗೆ, ಸಮಾಜದ ಕಳಕಳಿಯುಳ್ಳ ವ್ಯಕ್ತಿಗಳಿಗೆ ಈದಿನ ಹರ್ಷವನ್ನುಂಟು ಮಾಡುವುದು. ನಿಮ್ಮ ಸಲಹೆ-ಸೂಚನೆಗಳನ್ನು ಸ್ವೀಕರಿಸಲು ನಿಮ್ಮ ಅನುಯಾಯಿಗಳು ಕಾದಿರುವರು. ಅವರಿಗೆ ನಿರಾಶೆ ಮಾಡದಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

ಧನಸ್ಸು:- ಮನಸ್ಸಿಗೆ ಬೇಡದ ವಿಚಾರಗಳು ಈದಿನ ಮನಸ್ಸನ್ನು ಗಲಿಬಿಲಿಗೊಳಿಸುವುದು. ಇದಕ್ಕೆ ಪೂರಕವಾಗಿ ಮನೆಯಲ್ಲಿನ ಮಕ್ಕಳ ತುಂಟಾಟವು ನಿಮ್ಮ ನೆಮ್ಮದಿಯನ್ನು ಹಾಳು ಮಾಡಿ ಕೋಪಗೊಳ್ಳುವಂತೆ ಮಾಡುವುದು. ತಾಳ್ಮೆ ಇರಲಿ.

ಮಕರ:- ನಿಮ್ಮ ಮನೋಕಾಮನೆಗಳು ಈದಿನ ಪೂರ್ಣಗೊಳ್ಳುವುದು. ನೂತನ ಜನರ ಭೇಟಿ ಆಗುವುದು. ಮನೆಗೆ ದೂರದ ಊರಿನಿಂದ ನೆಂಟರು ಬರುವ ಸಾಧ್ಯತೆ. ಯೋಗ್ಯ ವಧು-ವರರಿಗೆ ವಿವಾಹದ ಮಾತುಕತೆಯಿಂದ ಸಂಭ್ರಮ.

ಕುಂಭ:- ಹಮ್ಮಿಕೊಂಡ ಕಾರ್ಯಗಳಲ್ಲಿ ಅಲ್ಪ ಹಿನ್ನಡೆಯಾದರೂ ಆ ಕಾರ್ಯದ ಬಗ್ಗೆ ಸೂಕ್ತ ಮಾಹಿತಿ ದೊರೆತು ಅದನ್ನು ಸರಿಪಡಿಸುವಿರಿ. ಮತ್ತು ಮೇಲಾಧಿಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹಣವನ್ನು ಔಷಧದಂತೆ ಖರ್ಚು ಮಾಡಿರಿ.

ಮೀನ:- ಕೆಲ ಗ್ರಹಗಳ ಅಶುಭ ಸಂಚಾರದಿಂದ ಅನಾರೋಗ್ಯ ಕಾಣಿಸಿಕೊಳ್ಳುವ ಸಾಧ್ಯತೆ. ಆದರೆ ವ್ಯೆದ್ಯಕೀಯ ತಪಾಸಣೆಯಲ್ಲಿ ಅನಾರೋಗ್ಯದ ಮೂಲ ಕಂಡುಹಿಡಿಯುವಲ್ಲಿ ವಿಫಲರಾಗುವರು. ಗುರುವಿನ ಮೊರೆ ಹೋಗಿರಿ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ