ಮಂಡ್ಯ: ಬಿಜೆಪಿಯ ಹಿರಿಯ ನಾಯಕಿ, ವಿಧಾನ ಪರಿಷತ್ ಮಾಜಿ ಉಪ ಸಭಾಮತಿ ವಿಮಲಾ ಗೌಡ (63) ಅವರು ಸೋಮವಾರ ಸಂಜೆ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಮಾಜಿ ಉಪ ಮುಖ್ಯಮಂತ್ರಿ, ವಿಧಾನಸಭೆಯ ಬಿಜೆಪಿ ಉಪ ನಾಯಕ ನಾಯಕ ಆರ್. ಅಶೋಕ್ ಅವರು ವಿಮಲಾ ಗೌಡರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ದೀರ್ಘ ಕಾಲ ಪಕ್ಷದಲ್ಲಿ ನಾನಾ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಅವರು ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು ಎಂದು ಅಶೋಕ್ ನೆನಪಿಸಿಕೊಂಡಿದ್ದಾರೆ.
ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದವರು.
ಮಾಜಿ ಉಪ ಮುಖ್ಯಮಂತ್ರಿ, ವಿಧಾನಸಭೆಯ ಬಿಜೆಪಿ ಉಪ ನಾಯಕ ನಾಯಕ ಆರ್. ಅಶೋಕ್ ಅವರು ವಿಮಲಾ ಗೌಡರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ದೀರ್ಘ ಕಾಲ ಪಕ್ಷದಲ್ಲಿ ನಾನಾ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಅವರು ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು ಎಂದು ಅಶೋಕ್ ನೆನಪಿಸಿಕೊಂಡಿದ್ದಾರೆ.
ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದವರು.